January 11, 2026

“ಒಂದು ಕಂತು ಬಾಕಿ – ರೈತನ ಮನೆಗೆ ನುಗ್ಗಿ ಜಾನುವಾರು ಎಳೆದೊಯ್ದ ಫೈನಾನ್ಸ್ ಗೂಂಡಾಗಳು!”

“ಒಂದು ಕಂತು ಬಾಕಿ – ರೈತನ ಮನೆಗೆ ನುಗ್ಗಿ ಜಾನುವಾರು ಎಳೆದೊಯ್ದ ಫೈನಾನ್ಸ್ ಗೂಂಡಾಗಳು!”

ಶಿವಮೊಗ್ಗ: ಜಿಲ್ಲೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ ‘ಗುಂಡಾಗಿರಿ’ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೇವಲ ಒಂದು ತಿಂಗಳ ಕಂತು ಬಾಕಿ ಇಟ್ಟ ಕಾರಣಕ್ಕೆ ರೈತನ ಜೀವಾಳವಾದ ಜಾನುವಾರುಗಳನ್ನು ಬಲಪ್ರಯೋಗದಿಂದ ಎಳೆದೊಯ್ದಿರುವ ಗೃಹಹಲ್ಲೆಯಂತ ಘಟನೆ ಸಿದ್ಲಿಪುರದಲ್ಲಿ ನಡೆದಿದೆ.

ಸಿದ್ಲಿಪುರ ಗ್ರಾಮದ ಭರತ್ ಎಂಬ ಕೃಷಿಕರು 2 ಲಕ್ಷ ರೂಪಾಯಿ ಲೋನ್ ಪಡೆದಿದ್ದರು. ನಿಯಮಿತವಾಗಿ ತಿಂಗಳಿಗೆ ₹9,000 ಕಂತು ಪಾವತಿಸುತ್ತಿದ್ದರೂ, ಹಾಲಿಡುವ ಹಸು ಅಕಾಲಿಕವಾಗಿ ಸಾವನ್ನಪ್ಪಿದ ದುರಂತದಿಂದಾಗಿ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇದರಿಂದ ಒಬ್ಬ ತಿಂಗಳ ಕಂತು ಮಾತ್ರ ಬಾಕಿ ಉಳಿದಿತ್ತು.

ಇದನ್ನು ನೆಪ ಮಾಡಿಕೊಂಡ ಫೈನಾನ್ಸ್ ಸಿಬ್ಬಂದಿಗಳು, ಯಾವುದೇ ಕಾನೂನಾತ್ಮಕ ನೋಟಿಸ್ ನೀಡದೆ, ನ್ಯಾಯಾಲಯ ಅನುಮತಿ ಪಡೆದೆ, ನೇರವಾಗಿ ರೈತನ ಮನೆಗೆ ದಬ್ಬಾಳಿಕೆಯಾಗಿ ನುಗ್ಗಿ, ಅವರ ಹೋರಿ ಮತ್ತು ಎರಡು ಹಸುಗಳನ್ನು ಬಲವಂತವಾಗಿ ಗೂಡ್ಸ್ ವಾಹನಕ್ಕೆ ಹಾಯಿಸಿ ಕೊಂಡೊಯ್ದಿದ್ದಾರೆ — ಗ್ರಾಮಸ್ಥರು ಇದನ್ನು ನೇರ ಶೋಷಣೆಯಂತೆ ಖಂಡಿಸಿದ್ದಾರೆ.

ಈ ಅಮಾನವೀಯ ವರ್ತನೆಗೆ ಬೇಸತ್ತ ರೈತ ಸಂಘಟನೆಗಳು ಫೈನಾನ್ಸ್ ಕಂಪನಿಯ ಕಚೇರಿಯ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿವೆ.“ಲೋನ್ ಬಾಕಿ ಇದ್ದರೆ ಕಾನೂನಿನ ಪ್ರಕ್ರಿಯೆ ಇದೆ — ಮನೆಗೆ ನುಗ್ಗಿ ಜಾನುವಾರು ದೋಚುವ ಹಕ್ಕನ್ನು ಯಾರು ಕೊಟ್ಟಿದ್ದಾರೆ?” ಎಂದು ಕಿಡಿಕಾರಿರುವ ಸಂಘಟನೆಗಳು, ತಕ್ಷಣ ಜಾನುವಾರುಗಳನ್ನು ರೈತನ ವಶಕ್ಕೆ ಮರಳಿಸಲು ಒತ್ತಾಯಿಸಿವೆ.

About The Author

Exit mobile version