Headlines

ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾಗಿ ಮುರುಳಿಧರ್ ಕೆರೆಹಳ್ಳಿ ಆಯ್ಕೆ

ರಿಪ್ಪನ್‌ಪೇಟೆ : 32ನೇ ವರ್ಷದ ಕಲಾ ಕೌಸ್ತುಭ ಕನ್ನಡ ಸಂಘಕ್ಕೆ ಹಾಗೂ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಿತಿಗೆ ಆಧ್ಯಕ್ಷರಾಗಿ ಮುರುಳಿ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಬಳೆಗಾರ್ ಆಯ್ಕೆಯಾಗಿದ್ದಾರೆ.

ಕಳೆದ ಸಾಲಿನ ಅಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕಲಾ ಕೌಸ್ತುಭ ಕನ್ನಡ ಸಂಘ 32ನೇ ವರ್ಷದ ವಾರ್ಷಿಕೋತ್ಸವ ಮತ್ತು 70ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬರುವ ನವೆಂಬರ್ 01 ರಿಂದ 3 ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಈ ಸಂಧರ್ಭದಲ್ಲಿ ಸುರೇಶ್ ಸಿಂಗ್ , ನಿರೂಪ್‌ಕುಮಾರ್  ರಾಮಚಂದ್ರ, ನಾಗರತ್ನ ದೇವರಾಜ್ , ರಾಘವೇಂದ್ರ ಆರ್ಟಿಸ್ಟ್, ಶೈಲಾ ಆರ್.ಪ್ರಭು, ಉಮಾ ಸುರೇಶ್ ,  ರೇಖಾ ರವಿ, ಪಿ.ಜೆ.ವರ್ಗೀಸ್ ,ದಿವಾಕರ್ ಕೆದಲುಗುಡ್ಡೆ ಹಾಗೂ ಇನ್ನಿತರರು ಇದ್ದರು.

About The Author

Exit mobile version