ಧರ್ಮಸ್ಥಳಕ್ಕೆ ಹೋಗಿ ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆ ಕೇಳುತ್ತೇನೆ – ಸುಜಾತಾ ಭಟ್
ಧರ್ಮಸ್ಥಳ ಅನನ್ಯ ಪ್ರಕರಣ – ಸುಜಾತ ಭಟ್ ಬಂಡವಾಳ ಬಯಲಿಗೆಳೆದು ಪ್ರಕರಣಕ್ಕೆ ತಿರುವು ತಂದ ಮೊದಲ ಮಾಧ್ಯಮ ಪೋಸ್ಟ್ ಮ್ಯಾನ್ ನ್ಯೂಸ್ ಕನ್ನಡ ..
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಶವಗಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯಾ ಭಟ್ ಕಟ್ಟುಕತೆ ಪ್ರಕರಣದ ತನಿಖೆಯನ್ನು ಎಸ್ಐಟಿ (SIT) ಮುಂದುವರಿಸಿದೆ. ಈ ಪ್ರಕರಣದ ಹಿಂದೆ ಬಹುಭಾಷಾ ನಟನ ಸಹೋದರನ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಎಸ್ಐಟಿ ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದೆ.
ಇದರ ಮಧ್ಯೆ, ಪ್ರಕರಣದ ಪ್ರಮುಖ ವ್ಯಕ್ತಿ ಸುಜಾತಾ ಭಟ್ ತಮ್ಮ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. “ನನ್ನ 60 ವರ್ಷದ ಜೀವನದಲ್ಲಿ ಇದು ಕಪ್ಪು ಚುಕ್ಕಿ. ನಾನು ತಪ್ಪು ಮಾಡಿದ್ದೇನೆ. ಧರ್ಮಸ್ಥಳಕ್ಕೆ ಹೋಗಿ ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆ ಕೇಳುತ್ತೇನೆ. ಕಲ್ಲು ಹೊಡೆಯಲು ಸಿದ್ಧನಿದ್ದೇನೆ ಎಂಬ ತಪ್ಪಿಗೆ ಪ್ಪು ಕಾಣಿಕೆ ಹಾಕುತ್ತೇನೆ,” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಸುಜಾತಾ ಭಟ್ ತಮ್ಮ ಹೇಳಿಕೆಯಲ್ಲಿ, ನಟನ ಸಹೋದರನ ಮನೆಯಲ್ಲಿ ವಾಸಂತಿ ಇರಬಹುದು ಎಂಬ ಶಂಕೆಯನ್ನು ತನಿಖೆಯ ಸಮಯದಲ್ಲೇ ವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ. ನಟನ ಸಹೋದರ ಕಾಲಿವುಡ್ ಕ್ಷೇತ್ರದ ನಟನಾಗಿದ್ದು, ವಾಸಂತಿಯ ಗಂಡನ ಗೆಳೆಯನಾಗಿರುವ ಮಾಹಿತಿ ಹೊರಬಿದ್ದಿದೆ. ಚೆನ್ನೈನಲ್ಲಿರುವ ಆತನ ವಿಳಾಸ ಪತ್ತೆಹಚ್ಚುವ ಕಾರ್ಯದಲ್ಲಿ ಎಸ್ಐಟಿ ನಿರತರಾಗಿದೆ.
ಧರ್ಮಸ್ಥಳ ಪ್ರಕರಣವು ರಾಜ್ಯದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದಾಗ, ಈ ಪ್ರಕರಣದ ನಿಜ ಚಿತ್ರಣವನ್ನು ಹೊರತೆಗೆದು ಟ್ವಿಸ್ಟ್ ತಂದವರು ಪತ್ರಕರ್ತ ರಫಿ ರಿಪ್ಪನ್ ಪೇಟೆ ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ ಎಂದು ರಾಜ್ಯದ ಜನರ ದಿಕ್ಕು ತಪ್ಪಿಸಿದ್ದ ಸುಜಾತಾ ಭಟ್ ಕುರಿತು ಅಸಲಿ ಮಾಹಿತಿ ಬಹಿರಂಗಪಡಿಸಿದ ಮೊದಲ ಪತ್ರಕರ್ತರೂ ಇವರು.
ಆರಂಭದಲ್ಲಿ “ಸೌಜನ್ಯ” ಪ್ರಕರಣದಿಂದ ಆರಂಭವಾದ ಈ ಕಥೆ, ನಂತರ “ಅನನ್ಯ” ಎಂಬ ಹೆಸರಿನ ಹುಡುಗಿಯ ಕತೆಗೂ ತಲುಪಿತು. ಎ.ಐ. ವಿಡಿಯೋ ಮೂಲಕ ದೇವಸ್ಥಾನದ ವಿರುದ್ಧ ಅಪಪ್ರಚಾರ ನಡೆಯಿತು. ಸಮೀರ್ ಎಂಬ ಯೂಟ್ಯೂಬರ್ ಮಾಡಿದ ವಿಡಿಯೋ ಜನರನ್ನು ಗೊಂದಲಕ್ಕೀಡಾಗುವಂತೆ ಮಾಡಿತ್ತು. ನಂತರ ಭೀಮ ಎಂಬಾತ “ನಾನು ಇಲ್ಲೇ ಕೆಲಸ ಮಾಡಿದ್ದೆ, ಶವಗಳನ್ನು ಹೂತ್ತಿದ್ದೇನೆ” ಎಂದು ಹೇಳಿ ಜನರ ವಿಶ್ವಾಸ ಪಡೆದುಕೊಂಡ. ಅದೇ ವೇಳೆಗೆ ಮತ್ತೊಬ್ಬ ಮಹಿಳೆ “ನಾನು ಸುಜಾತಾ ಭಟ್, ನನ್ನ ಮಗಳು ಅನನ್ಯ ನಾಪತ್ತೆಯಾಗಿದೆ” ಎಂದು ಹೇಳಿ ಕಥೆಗೆ ಹೊಸ ತಿರುವು ನೀಡಿದರು.
ಇಷ್ಟೆಲ್ಲ ಗೊಂದಲ ನಡೆಯುತ್ತಿದ್ದಾಗ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ತೀವ್ರಗೊಳ್ಳುತ್ತಿತ್ತು. ಸರ್ಕಾರದ ಎಸ್ಐಟಿ ತನಿಖೆಯೂ ಆರಂಭವಾಯಿತು. ಆದರೆ ಶವ ಪತ್ತೆಯಾಗದೆ ಪ್ರಕರಣ ಸಸ್ಪೆನ್ಸ್ನಲ್ಲೇ ಮುಂದುವರಿಯಿತು.
ಎಸ್ ಐಟಿ ಮೂಲದಿಂದ ಸುಜಾತ ಭಟ್ ಗೂ ರಿಪ್ಪನ್ ಪೇಟೆಗೂ ಲಿಂಕ್ ಇರುವ ಬಗ್ಗೆ ದೊರೆತ ಸಣ್ಣ ಸುಳಿವಿನ ಆಧಾರದ ಮೇಲೆ ಪೋಸ್ಟ್ ಮ್ಯಾನ್ ನ್ಯೂಸ್ ಸಂಪಾದಕ ,ಯುವ ಪತ್ರಕರ್ತ ರಫಿ ರಿಪ್ಪನ್ ಪೇಟೆ ಕೂಡಲೇ ಕಾರ್ಯಪ್ರವೃತ್ತರಾಗಿ ಸುಜಾತಾ ಭಟ್ ಜಾಡು ಹಿಡಿದು ತನಿಖಾ ವರದಿ ಕೈಗೊಂಡು ಸುಜಾತ ಭಟ್ 2000 ನೇ ಇಸವಿಯಲ್ಲಿ ಸುಜಾತ ಬಾಳಿಗ ಆಗಿ ವಾಸವಿದ್ದ ಮನೆ ಹುಡುಕಿ ಅಲ್ಲಿನ ಅಕ್ಕಪಕ್ಕ ಮನೆಯವರು ಹಾಗೂ ಸ್ಥಳೀಯರಿಂದ ಮಾಹಿತಿಯನ್ನು ಸಂಗ್ರಹಿಸಿದರು. ಅಲ್ಲದೆ ಕಮಲವಾಣಿ ಮತ್ತು ಸುಧಾ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಸುಜಾತಾ ಭಟ್ ಸಂಬಂಧಿತ ಲೇಖನಗಳನ್ನು ತೆಗೆಯುವ ಮೂಲಕ ಮಹತ್ವದ ಸುಳಿವುಗಳನ್ನು ಪತ್ತೆ ಹಚ್ಚಿದ್ದರು.
ವ್ಯವಸ್ಥಿತ ಅಪಪ್ರಚಾರದಿಂದ ದೇಶಾದ್ಯಂತ ಸುದ್ದಿಯಾಗಿದ್ದ ಅನನ್ಯ ಭಟ್ ಪ್ರಕರಣದಲ್ಲಿ ಸುಜಾತಾ ಭಟ್ ಅವರಿಗೆ ಮಗಳೇ ಇಲ್ಲ ಎಂಬ ಸತ್ಯ ಬಹಿರಂಗಪಡಿಸಿದರು. ಈ ಸುದ್ದಿ ಹೊರಬಿದ್ದ ಕೂಡಲೇ ಮೈನ್ ಸ್ಟ್ರೀಮ್ ಮಾದ್ಯಮಗಳಲ್ಲೂ ಅವರ ವೀಡಿಯೋಗಳು ಹರಿದಾಡಿ ಎಲ್ಲೆಡೆ ಸಂಚಲನ ಮೂಡಿಸಿತು ನಂತರ ಧರ್ಮಸ್ಥಳ ಪರವಾಗಿ ಜನತೆ ಪ್ರತಿಭಟನೆಯಲ್ಲಿ ತೊಡಗಿದರು. ದೇವಸ್ಥಾನದ ವಿರುದ್ಧ ಮಾತನಾಡುತ್ತಿದ್ದವರ ಬಾಯಿಗೆ ಬೀಗ ಬಿತ್ತು ಎನ್ನಬಹುದು.
ಇಂದು ಯಾವುದೇ ಟಿವಿ ಮಾಧ್ಯಮಗಳು “ಮೊದಲ ಸುದ್ದಿ ನಮ್ಮದು” ಎಂಬ ಟ್ಯಾಗ್ ಹಾಕಿಕೊಳ್ಳಬಹುದಾದರೂ, ಧರ್ಮಸ್ಥಳ ಪ್ರಕರಣದಲ್ಲಿ ತಮ್ಮದೇ ಸ್ಥಳೀಯ ಮಾದ್ಯಮದಲ್ಲಿ ಸುದ್ದಿ ಬಿತ್ತರಗೊಳಿಸಿ ರಾಜ್ಯಮಟ್ಟದ ಚಾನೆಲ್ ಗಳು ತಮ್ಮತ್ತ ತಿರುಗುವಂತೆ ಮಾಡಿ ದೇವಸ್ಥಾನದ ವಿಚಾರದಲ್ಲಿ ಜನರ ಮನಸ್ಸು ತಿರುವು ಪಡೆಯಲು ಕಾರಣವಾದವರು POSTMAN NEWS ತಂಡ ಎಂಬುವುದರಲ್ಲಿ ಸಂಶಯವಿಲ್ಲ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಮನನೊಂದು ವಿಷ ಸೇವಿಸಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಸಾವು A NEET aspirant…
ಆಗುಂಬೆಯಿಂದ ರಿಪ್ಪನ್ಪೇಟೆವರೆಗೆ ಪೊಲೀಸರ ಚೇಸಿಂಗ್ ಪ್ರಕರಣ : ಕಾರು ಬಿಟ್ಟು ಕಾಡಿಗೆ ಪರಾರಿಯಾಗಿದ್ದ ಆರೋಪಿಯ ಬಂಧನ Agumbe Police arrested…
ಎಂಟು ಕಾಲು, ಮೂರು ಕಿವಿ, ಎರಡು ಬಾಲ, ಎರಡು ನಾಲಿಗೆ ಇರುವ ಕುರಿ ಜನನ - ಗ್ರಾಮಸ್ಥರಲ್ಲಿ ಅಚ್ಚರಿ A…
ಆನಂದಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಬಂಗಾರದ ನಾಣ್ಯಗಳ ನೀಡಿ ₹9.60 ಲಕ್ಷ ವಂಚನೆ - ನಗದು ಸಹಿತ ಆರೋಪಿ…
ಸಾಗರ ಬಸ್ ಪ್ರಯಾಣದಲ್ಲಿ ಮಹಿಳೆಗೆ ಶಾಕ್: ಗಾಢ ನಿದ್ರೆಯಲ್ಲಿದ್ದ ವೇಳೆ ₹17.55 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ A…
ಆನಂದಪುರ : ವಿದ್ಯುತ್ ತಂತಿ ತುಂಡಾಗಿ ಬಿದ್ದು ಎಮ್ಮೆ ಸಾವು A buffalo died after coming into contact…