ಶಾರೂಕ್ ಖಾನ್ ಕೊಲೆ ಪ್ರಕರಣ – ಆರೋಪಿಗಳಿಗೆ ಆಜೀವ ಕಾರಾಗೃಹ ಶಿಕ್ಷೆ

ಶಾರೂಕ್ ಖಾನ್ ಕೊಲೆ ಪ್ರಕರಣ – ಆರೋಪಿಗಳಿಗೆ ಆಜೀವ ಕಾರಾಗೃಹ ಶಿಕ್ಷೆ

ಭದ್ರಾವತಿ: ಶಾರೂಖ್‌ಖಾನ್ ಎಂಬ ಯುವಕನನ್ನು ಕೊಲೆಮಾಡಿದ್ದ ರಮೇಶ ಯಾನೆ ಹಂದಿ ರಮೇಶ, ವೆಂಕಟರಾಮ, ಚಂದ್ರ ಯಾನೆ ಚಾಣ, ಕಾರ್ತಿಕ, ಮಧುಸೂದನ ಯಾನೆ ಗುಂಡ, ರಮೇಶ ಯಾನೆ ಕೆಳವಿ ರಮೇಶ, ನಾಗರಾಜ, ಸಿದ್ಧಪ್ಪ ಎಂಬ 08 ಜನ ಆರೋಪಿಗಳಿಗೆ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆಜೀವ ಕಾರಾಗೃಹವಾಸ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಹೊಸಮನೆ ನಿವಾಸಿಯಾದ ಶಾರೂಖ್ ಖಾನ್ ಎಂಬುವನಿಂದ ೧ನೇ ಆರೋಪಿ ಹಂದಿ ರಮೇಶ್ ೨೦೧೯ರಲ್ಲಿ ೨೦ಸಾವಿರ ರೂ ಸಾಲ ಪಡೆದಿದ್ದನೆಂದು ಹಣ ವಾಪಾಸು ಕೊಟ್ಟಿರದಿದ್ದ ಕಾರಣಕ್ಕೆ ಅವರಿಬ್ಬರ ನಡುವೆ ಜಗಳವಾಗಿತ್ತಂದು, ಅದೇ ರೀತಿ ಶಾರೂಖ್ ಖಾನ್ ತಾನು ಕೊಲೆಯಾಗುವ ೬ತಿಂಗಳ ಹಿಂದೆ ಸದರಿಪ್ರಕರಣದ ೨ನೆ ಆರೋಪಿ ವೆಂಕಟರಾಮನಿಗೆ ಚಾಕುಹಾಕಲು ಯತ್ನಿಸಿದ ಘಟನೆ ನಡೆದಿದ್ದು ಆ ಕುರಿತಂತೆ ಹೊಸಮನೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳು ಶಾರೂಖ್‌ಖಾನ್‌ನನ್ನು  ಕೊಲೆ ಮಾಡಬೇಕಂದು ನಿಶ್ಚಯಿಸಿದ್ದರು.  ವಿಷಯ ಶಾರೂಖ್ ಖಾನ್‌ಗೆ ತಿಳಿದು ಆತ ಕೆಲಕಾಲ ಭದ್ರಾವತಿ  ಬಿಟ್ಟು  ಬೆಂಗಳೂರಿಗೆ ಹೋಗಿದ್ದನು.  ೩೦-೦೯೨೦೨೦ರಂದು ಬೆಂಗಳೂರಿನಿಂದ ಭದ್ರಾವತಿಗೆ ವಾಪಾಸ್ ಬಂದಿದ್ದಾನೆಂಬ ವಿಷಯ ಆರೋಪಿಗಳಿಗೆ ತಿಳಿದು ಅರೋಪಿUಳು  ಶಾರೂಖ್‌ಖಾನ್ ಮನೆಗೆ ಹೋಗಿ ವಿಚಾರಿಸಿ  ಅವರ ಮನೆಯವರಿಗೆ ಬೆದರಿಕೆ ಹಾಕಿದ್ದರು.

ದಿ.೩೦-೦೯೨೦೨೦ರಂದು ರಾತ್ರಿ ೧೨.೪೫ರ ಸಮಯದಲ್ಲಿ  ಶಾರೂಖ್‌ಖಾನ್ ಹೊಸಮನೆಯ ಹುನಮಂತಕಾಲೋನಿಯ ಸಮೀಪದ ನೂರಾನಿ ಮಸಿದಿಯ ಬಳಿ ಆತನ ದೊಡ್ಡಮ್ಮನ ಮನೆ ಬಳಿ ಹೊರಗೆ ನಿಂತಿದ್ದಾಗ ಅಲ್ಲಿಗೆ ಆರೋಪಿUಳು ಕೊಲೆ ಮಾಡಲು ಹೋದಾಗ, ಶಾರೂಕ್‌ಖಾನ್ ಅವರಿಂದ ತಪ್ಪಿಸಿಕೊಳ್ಳಲು ಆ ಬಡಾವಣೆಯಲ್ಲೆಲ್ಲ ಓಡಿದ್ದರೂ ಅವನನ್ನು ಬೆನ್ನಟ್ಟಿ  ಮೊಬೈಲ್‌ಟಾರ್ಚ್  ಬೆಳಕಿನ್ನು ಬಿಟ್ಟು ಗಿಡಗಂಟಿಯ ಪೊದೆಯಲ್ಲಿ ಶಾರೂಖ್‌ಖಾನ್ ಬಚ್ಚಿಟ್ಟುಕೊಂಡಿರುವುದನ್ನು ಪತ್ತೆಹಚ್ಚಿ ಅವನನ್ನು ಹೊರಗೆಳೆದು ಅವನ ತಲೆಗೆ ಅಲ್ಲಿದ್ದ ಸಾರ್ವ ಮರದ ತುಂಡಿನಿಂದ ಬಲವಾಗಿ ಹೊಡೆದುಕುತ್ತಿಗೆಯನ್ನು ಕಾಲಿಂದ ತುಳಿದು, ನಾಲಿಗೆ ಹೊರಬರುವಂತೆ ಮಾಡಿ  ಬರ್ಬರವಾಗಿ ಕೊಲೆಮಾಡಿದ್ದರು.

ಶಾರೂಖ್‌ಖಾನ್ ತಂದೆ ಮಹಮದ್ ಅಖ್ತರ್ ಹೊಸಮನೆ ಪೋಲಿಸ್ ಠಾಣೆಗೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು.  ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ  ನ್ಯಾಯಾಧೀಶೆ  ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಎಲ್ಲಾ ೮ಜನ ಆರೋಪಿಗಳ ಮೇಲಿನ ಅರೋಪ ಸಾಬೀತಾದ ಕಾರಣ ಆರೋಪಿಗಳೆಲ್ಲರಿಗೂ  ವಿವಿಧ ಕಲಂನ   ಪ್ರತ್ಯೇಕ ಶಿಕ್ಷೆ ಪ್ರಕಟಿಸಿದ್ದಾರೆ.

ವಿವಿಧ ಆರೋಪಗಳ ಸಂಭಂಧ ತಲಾ ೧ಲಕ್ಷದ ೬೦ ಸಾವಿರ ದಂಡ ವಿಧಿಸಿ ಸದರಿ ದಂಡದ ಮೊತ್ತದಲ್ಲಿ ಕೊಲೆಯಾದ  ಶಾರೂಖ್ ಖಾನ್ ತಂದೆ ಮಹಮದ್ ಅಕ್ತರ್‌ಗೆ  ಹಾಗೂ ತಾಯಿ ಶಂಶದಾಬಾನು ಅವರಿಗೆ ತಲಾ ೧ಲಕ್ಷದ ೫೦ ಸಾವಿರ ರೂಗಳನ್ನು ನೀಡಬೇಕೆಂದು ಆದೇಶಿಸಿ ಸೋಮವಾರ ತೀರ್ಪು ನೀಡಿದರು.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ.ಪಿ ವಾದಿಸಿದ್ದರು.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…

18 hours ago

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…

18 hours ago

ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !!

ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…

22 hours ago

ಈಸ್ಟ್‌ವೆಸ್ಟ್‌ ಬಸ್ ಸಂಸ್ಥೆ ಮಾಲೀಕ, ಮಾಜಿ ವಕ್ಫ್‌ ಬೋರ್ಡ್ ಅಧ್ಯಕ್ಷ ತಲ್ಕೀನ್ ಅಹ್ಮದ್ ನಿಧನ

ಈಸ್ಟ್‌ವೆಸ್ಟ್‌ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…

1 day ago

ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…

1 day ago

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…

1 day ago