ಹೊಟೇಲ್ ಗೆ ರಿವ್ಯೂ ಟಾಸ್ಕ್ ನೆಪ – ವ್ಯಕ್ತಿ 11.35 ಲಕ್ಷ ವಂಚನೆ , ಪ್ರಕರಣ ದಾಖಲು
ಶಿವಮೊಗ್ಗ : ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹೊಸ ಹೊಸ ತಂತ್ರಗಳನ್ನು ಬಳಸಿ ವಂಚಕರು ಜನರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಶಿವಮೊಗ್ಗದ ಒಬ್ಬ ವ್ಯಕ್ತಿ ಬರೋಬ್ಬರಿ ₹11,35,900 ಹಣವನ್ನು ಸೈಬರ್ ಕಳ್ಳರಿಗೆ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ದೂರುದಾರರ ವಾಟ್ಸಾಪ್ಗೆ ಪರಿಚಿತ ಮೊಬೈಲ್ ಸಂಖ್ಯೆಯಿಂದ ಒಂದು ಲಿಂಕ್ ಕಳುಹಿಸಲಾಗಿತ್ತು. ಆ ಲಿಂಕ್ನ್ನು ಕ್ಲಿಕ್ ಮಾಡಿದ ಬಳಿಕ ಅವರು ಟೆಲಿಗ್ರಾಂ ಗುಂಪಿಗೆ ಸೇರಿದರು. ನಂತರ ವಂಚಕರು ಆನ್ಲೈನ್ನಲ್ಲಿ ಹೋಟೆಲ್ಗಳ ವಿಮರ್ಶೆ ನೀಡುವ ಟಾಸ್ಕ್ಗಳನ್ನು ಕಳುಹಿಸಿ, ಹೆಚ್ಚಿನ ಲಾಭಾಂಶ ನೀಡುವುದಾಗಿ ಭರವಸೆ ನೀಡಿದರು.
ಹಂತ ಹಂತವಾಗಿ ಐಎಂಪಿಎಸ್, ಆರ್ಟಿಜಿಎಸ್ ಮತ್ತು ಯುಪಿಐ ಮೂಲಕ ಹಣವನ್ನು ವರ್ಗಾಯಿಸಲು ಪ್ರೇರೇಪಿಸಿದ ವಂಚಕರು, ನಂತರ “ಲಾರ್ಜರ್ ಅಮೌಂಟ್ ವಿಥ್ಡ್ರಾ ಮಾಡಲು ಇನ್ನೂ ₹6,00,000 ಸೇರಿಸಬೇಕು” ಎಂದು ಒತ್ತಾಯಿಸಿದರು. ಈ ನಂಬಿಕೆಗೆ ಬಲಿಯಾದ ದೂರುದಾರರಿಂದ ಒಟ್ಟು ₹11,35,900 ವಂಚಿಸಲಾಗಿದೆ.
ಲಾಭಾಂಶ ನೀಡದೆ ಹಣ ಕಸಿದುಕೊಂಡ ವಂಚಕರ ವಿರುದ್ಧ ದೂರು ದಾಖಲಿಸಿರುವ ಈ ಪ್ರಕರಣವನ್ನು ಶಿವಮೊಗ್ಗ ಸೈಬರ್ ಸಿಇಎನ್ ಸೈಬರ್ ಕ್ರೈಂ ಠಾಣೆ ತನಿಖೆಗೆ ತೆಗೆದುಕೊಂಡಿದೆ.
ಹೊಸನಗರ ತಾಲೂಕಿನ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ | ಶಿಕ್ಷಣ ಸಚಿವರಿಂದ ಅಭಿನಂದನೆ Rural teacher Ratnakumari…
ಬೇಟೆಗೆ ಹೊರಟಿದ್ದ ನಾಲ್ವರ ಬಂಧನ; ಎರಡು ನಾಡ ಬಂದೂಕು ಸೇರಿ ಹಲವು ವಸ್ತು ವಶಕ್ಕೆ ! Four people were…
ಪ್ರವಾಸಿ ಬಸ್ ಪಲ್ಟಿ: ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಸಾವು, 20 ಮಂದಿಗೆ ಗಾಯ nursing students died and 20…
ಬೆಂಗಳೂರು ಮೂಲದ ಸಿವಿಲ್ ಕಂಟ್ರಾಕ್ಟರ್ ತೀರ್ಥಹಳ್ಳಿಯಲ್ಲಿ ನಾಪತ್ತೆ: ಮಾಹಿತಿ ನೀಡಲು ಪೊಲೀಸರ ಮನವಿ 55-year-old Bengaluru-based civil contractor Anil…
ಕರ್ತವ್ಯ ನಿರತ ಅರಣ್ಯ ವಾಚರ್ ಮೇಲೆ ಕರಡಿ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರಣ್ಯಾಧಿಕಾರಿಗಳು Forest department…
ರಾತ್ರಿ ವೇಳೆ ರೈತನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ಇಬ್ಬರು ಪೊಲೀಸರ ವಶಕ್ಕೆ Shivamogga rural police arrested two…