ಮುಂಗಾರು ಆರಂಭದಲ್ಲೇ ತುಂಬಿದ ತುಂಗೆ – ೫ ಕ್ರಸ್ಟ್ ಗೇಟುಗಳಿಂದ ೨ ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಶಿವಮೊಗ್ಗ: ಮುಂಗಾರುಪೂರ್ವ ಮಳೆಗೆ ತುಂಗಾ ಅಣೆಕಟ್ಟು ಭರ್ತಿಯಾಗಿದ್ದು, ೫ ಕ್ರಸ್ಟ್ ಗೇಟುಗಳ ಮೂಲಕ ನದಿಗೆ ೨ ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿ ತುಂಬುವ ಅಣೆಕಟ್ಟಾಗಿದೆ.
ಅಣೆಕಟ್ಟೆಗೆ ೭,೫೦೦ ಕ್ಯೂಸೆಕ್ ನೀರು ಒಳ ಹರಿವು ಇರುವ ಕಾರಣ ಐದು ಕ್ರಸ್ಟ್ ಗೇಟ್ಗಳ ಮೂಲಕ ೨ ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನೂ ಒಂದು ವಾರದಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದೆ. ಆಗ ಡ್ಯಾಂನಿಂದ ಇನ್ನಷ್ಟು ನೀರು ನದಿಗೆ ಬಿಡುವ ಸಾಧ್ಯತೆ ಇದೆ.
ತುಂಬಿದ ತುಂಗಾ ಅಣೆಕಟ್ಟು:
ರಾಜ್ಯದ ಅತಿ ಚಿಕ್ಕ ಅಣೆಕಟ್ಟು ತುಂಗಾ ಅಣೆಕಟ್ಟು. ಈ ಅಣೆಕಟ್ಟು ಈಗಾಗಲೇ ತುಂಬಿದೆ. ಅಣೆಕಟ್ಟೆಯ ಒಟ್ಟು ಎತ್ತರ ೫೮೮.೨೪ ಮೀಟರ್. ಹಾಲಿ ಅಣೆಕಟ್ಟೆಯಲ್ಲಿ ೫೮೭.೫೪ ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟು ತುಂಬಲು ಒಂದು ಅಡಿ ಮಾತ್ರ ಬಾಕಿ ಇದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಒಳ ಹರಿವು ಹೆಚ್ಚುತ್ತಿದೆ.
“ಇಂದು ಬೆಳಗ್ಗೆ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಜಾಸ್ತಿ ಆಗುತ್ತಿದ್ದಂತೆಯೇ ಜಲಾಶಯದಲ್ಲಿ ಇರುವ ಬೃಂದಾವನ ಜಲ ವಿದ್ಯುತ್ ಉತ್ಪಾದನಾ ಘಟಕಕ್ಕೆ ೫ ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು. ಈಗ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾದ ಕಾರಣಕ್ಕೆ ನದಿಗೆ ನೀರು ಬಿಡಲಾಗುತ್ತಿದೆ. ನದಿಗೆ ಒಟ್ಟು ೨೦೦೦ ಕ್ಯೂಸೆಕ್ ನೀರು ಬಿಡಲಾಗಿದೆ. ಅಣೆಕಟ್ಟೆಯಲ್ಲಿ ೩.೨೪ ಟಿಎಂಸಿ ನೀರು ಸಂಗ್ರಹವಾಗಿದೆ” ಎಂದು ತುಂಗಾ ಮೇಲ್ಡಂಡೆ ಯೋಜನೆಯ ಇಂಜಿನಿಯರ್ ತಿಪ್ಪ ನಾಯ್ಕ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಬ್ಬರದ ಮಳೆ:
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ತಾಲೂಕಿನ ಆಗುಂಬೆ ೧೧೬.೨ ಮಿಮಿ, ಹೊನ್ನೆತಾಳಿನಲ್ಲಿ ೧೦೫.೫ ಮಿಮಿ, ಬಿದರಗೋಡಿನಲ್ಲಿ ೯೩ ಮಿಮಿ, ಎರೆಹಳ್ಳಿಯಲ್ಲಿ ೭೧ ಮಿಮಿ, ಆರಗದಲ್ಲಿ ೬೮.೫ ಮಿಮಿ, ಮುಳಬಾಗಿಲಿನಲ್ಲಿ ೬೭ ಮಿಮಿ, ನೆರಟೂರಿನಲ್ಲಿ ೬೫.೫ ಮಿಮಿ, ಹೊಸಹಳ್ಳಿಯಲ್ಲಿ ೬೫ ಮಿಮಿ, ತೀರ್ಥಮತ್ತೂರಿನಲ್ಲಿ ೫೫.೫ ಮಿಮಿ, ಮೇಗರವಳ್ಳಿಯಲ್ಲಿ ೫೯ ಮಿಮಿ, ಬೆಜ್ಜವಳ್ಳಿಯಲ್ಲಿ ೪೫.೫ ಮಿಮಿ,ಬಂದ್ಯ ಕುಕ್ಕೆ ೪೪.೫ ಮಿಮಿ, ಸಾಗರದ ಖಂಡಿಕಾದಲ್ಲಿ ೬೩.೫ ಮಿಮಿ, ಕೆಳದಿಯಲ್ಲಿ ೪೯ ಮಿಮಿ, ಮಾಳ್ವೆಯಲ್ಲಿ ೪೭ ಮಿಮಿ, ಕಲ್ಮನೆ ೪೫ ಮಿಮಿ, ಭೀಮನೇರಿಯಲ್ಲಿ ೪೦ ಮಿಮಿ ಮಳೆಯಾಗಿದೆ. ಹೊಸನಗರದಲಿ ೫೦.೪ ಮಿಮಿ, ಸೋನಾಲೆಯಲ್ಲಿ ೪೮ ಮಿಮಿ, ಮೇಲಿನ ಬೆಸಿಗದ ೫೯.೫ ಮಿಮಿ, ಸೊರಬದ ಗುಡವಿಯಲ್ಲಿ ೪೬.೫ ಮಿಮಿ, ನ್ಯಾಸಿರಿಯಲ್ಲಿ ೫೭ ಮಿಮಿ ಮಳೆಯಾಗಿದೆ.
ಜಲಾಶಯಗಳ ವಿವರ:
ತುಂಗಾ ಜಲಾಶಯದ ಒಳಹರಿವು ಹೆಚ್ಚಾಗಿದೆ. ೧೨ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ೮ ಗೇಟು ಮತ್ತು ಪವರ್ ಹೌಸ್ ನಿಂದ ೧೨ ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ನಿನ್ನೆ ೪ ಗೇಟು ಮೇಲೆಕ್ಕೆ ಎತ್ತಿ ೭೫೦೦ ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು. ಇಂದು ನಾಲ್ಕುವರೆ ಸಾವಿರ ಕ್ಯೂಸೆಕ್ ನೀರು ಹೆಚ್ಚು ಹರಿದು ಬರುತ್ತಿದೆ.
ಭದ್ರಾ ಜಲಾಶಯಕ್ಕೆ ನೀರು ಹೆಚ್ಚಿನ ನೀರು ಹರಿದು ಬರುತ್ತಿದೆ. ನಿನ್ನೆ ೧೫೦ ಕ್ಯೂಸೆಕ್ ನೀರು ಹರಿದು ಬರುತ್ತಿದ್ದ ಒಳಹರಿವು ಇಂದು ಬೆಳಿಗ್ಗೆ ೩೫೦೦ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ ೧೩೬ ಅಡಿ ನೀರು ಇದ್ದ ಭದ್ರ ಜಲಾಶಯದಲ್ಲಿ ಇಂದು ೧೩೭.೬ ಅಡಿ ನೀರು ಸಂಗ್ರಹವಾಗಿದೆ.
ಲಿಂಗನಮಕ್ಕಿ:
ಲಿಂಗನಮಕ್ಕಿ ಜಲಾಶಯದಲ್ಲೂ ಇಂದು ನೀರಿನ ಒಳಹರಿವು ಹೆಚ್ಚಾಗಿದೆ. ನಿನ್ನೆ ೧೦,೯೦೦ ಕ್ಯೂಸೆಕ್ ನೀರು ಹರಿದು ಬರುತ್ತಿದ್ದ ಜಲಾಶಯಕ್ಕೆ ಇಂದು ೧೭೫೩೦ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ೧೫೧.೬೪ ಟಿಎಂಸಿ ನೀರು ಸಂಗ್ರಹದ ಜಲಾಶಯ ೧೮೧೯ ಅಡಿ ನೀರಿನ ಸಂಗ್ರಹದ ಸಾಮರ್ಥ್ಯ ಹೊಂದಿದೆ. ಶೇ.೨೧.೮೨ ರಷ್ಡು ನೀರು ಸಂಗ್ರಹವಾಗಿದೆ ೧೭೬೪.೮೪ ಅಡಿ ನೀರು ಸಂಗ್ರಹವಾಗಿದೆ.
ಕರ್ನಾಟಕ SIR ಅವಧಿ ಮತ್ತೆ ವಿಸ್ತರಣೆ: ಆಗಸ್ಟ್ 17ರವರೆಗೆ ಮನೆ ಮನೆಗೆ BLO ಭೇಟಿ ; ಅಕ್ಟೋಬರ್ 27ಕ್ಕೆ ಅಂತಿಮ…
RIPPONPETE | ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧೀರ್ ಪಿ , ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆಯ್ಕೆ –…
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಮನನೊಂದು ವಿಷ ಸೇವಿಸಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಸಾವು A NEET aspirant…
ಆಗುಂಬೆಯಿಂದ ರಿಪ್ಪನ್ಪೇಟೆವರೆಗೆ ಪೊಲೀಸರ ಚೇಸಿಂಗ್ ಪ್ರಕರಣ : ಕಾರು ಬಿಟ್ಟು ಕಾಡಿಗೆ ಪರಾರಿಯಾಗಿದ್ದ ಆರೋಪಿಯ ಬಂಧನ Agumbe Police arrested…
ಎಂಟು ಕಾಲು, ಮೂರು ಕಿವಿ, ಎರಡು ಬಾಲ, ಎರಡು ನಾಲಿಗೆ ಇರುವ ಕುರಿ ಜನನ - ಗ್ರಾಮಸ್ಥರಲ್ಲಿ ಅಚ್ಚರಿ A…
ಆನಂದಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಬಂಗಾರದ ನಾಣ್ಯಗಳ ನೀಡಿ ₹9.60 ಲಕ್ಷ ವಂಚನೆ - ನಗದು ಸಹಿತ ಆರೋಪಿ…