ಐದು ವರ್ಷದ ಮಗುವನ್ನು ಅತ್ಯಾಚಾರವೆಸಗಿದ ಆರೋಪಿಗೆ ಗುಂಡಿಕ್ಕಿದ ಪಿಎಸ್ಐ ಅನ್ನಪೂರ್ಣರವರ ದಿಟ್ಟ ತನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶಂಸೆ
ಐದು ವರ್ಷದ ಮಗುವನ್ನು ಅತ್ಯಾಚಾರವೆಸಗಿದ ಆರೋಪಿಗೆ ಗುಂಡಿಕ್ಕಿದ ಪಿಎಸ್ಐ ಅನ್ನಪೂರ್ಣರವರ ದಿಟ್ಟ ತನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶಂಸೆ
ರಿಪ್ಪನ್ಪೇಟೆ;-ಇತ್ತಿಚೆಗೆ ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ನನ್ಯ ಎಸಗುವ ಮೂಲಕ ಬಾಲಕಿಯ ಸಾವಿಗೆ ಕಾರಣವಾದ ಆರೋಪಿಗೆ ಗುಂಡು ಹಾರಿಸಿದ ಹುಬ್ಬಳ್ಳಿಯ ಪಿಎಸ್ಐ ಆನ್ನಪೂರ್ಣರವರ ಈ ದಿಟ್ಟತನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸೆಲ್ಯೂಟ್ ಎನ್ನುವ ಮೂಲಕ ಪೊಲೀಸ್ ಇಲಾಖೆಯ ಕ್ರಮವನ್ನು ಪ್ರಶಂಸಿಸಿದ್ದಾರೆ.
ರಿಪ್ಪನ್ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪುಟ್ಟ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿ ಕೊಲೆ ಮಾಡುವ ಮೂಲಕ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದ ದುರುಳನನ್ನು ಗುಂಡಿಕ್ಕಿದ ಮಹಿಳಾ ಪಿಎಸ್ಐ ಅನ್ನಪೂರ್ಣರವರ ಗಟ್ಟಿತನಕ್ಕೆ ನನ್ನದೊಂದು ಸೆಲೂಟ್ ಎಂದು ಹೇಳಿ ಇಂತಹ ನೀಚ ಕೃತ್ಯ ಎಸಗುವವರಿಗೆ ಎಚ್ಚರಿಕೆಯ ಗಂಟೆಯನ್ನು ಸಹ ನೀಡಿದ್ದಾರೆ. ನಾನು ಈ ಹಿಂದಿನಿಂದಲೂ ತಪ್ಪು ಮಾಡಿದವರನ್ನು ಕೂಡಲೇ ಗಲ್ಲಿಗೇರಿಸಿ ಎಂದು ಹೇಳಿಕೊಂಡು ಬಂದವನು ಆದನ್ನು ಸಮರ್ಥವಾಗಿ ನಿರ್ವಹಿಸಿದ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
28 ಕೋಟಿ ಅಭಿವೃದ್ದಿ ಕಾಮಾಗರಿ ಪ್ರಗತಿಯಲ್ಲಿದೆ;-
ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಡೆಹಳ್ಳಿಯಿಂದ-ರಿಪ್ಪನ್ಪೇಟೆ ಆರ್.ಎಂ.ಸಿ.ಯಾರ್ಡ್ವರಗೆ ರಸ್ತೆ ಅಗಲೀಕರಣದೊಂದಿಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ 20 ಕೋಟಿ ರೂ ಅನುದಾನ ಬಿಡುಗಡೆಗೊಳಿಸಿ ಟೆಂಡರ್ ಮುಗಿದು ಕಾಮಗಾರಿ ಭರದಿಂದ ಸಾಗಿದ್ದು ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಮುಕ್ತಗೊಳ್ಳಲಿದೆ. ರಿಪ್ಪನ್ಪೇಟೆಯ ಪ್ರಥಮ ದರ್ಜೆ ಕಾಲೇಜ್ ಬಳಿಯಿಂದ ತೀರ್ಥಹಳ್ಳಿ ರಸ್ತೆಯ ಎರಡು ಕಿ.ಮೀ. ದ್ವಿ ಪಥ ರಸ್ತೆ ಕಾಮಗಾರಿಗೆ 5.35.ಕೋಟಿ ರೂ ವೆಚ್ಚದ ಬಾಕ್ಸ್ ಚರಂಡಿ ಮತ್ತು ಡಿವೈಂಡರ್ (ರಸ್ತೆ ವಿಭಜಕ) ನಿರ್ಮಾಣ ಮತ್ತು ರಸ್ತೆ ಆಗಲೀಕರಣದೊಂದಿಗೆ ಡಾಂಬರೀಕರಣ ಕಾಮಗಾರಿಯು ಪೂರ್ಣಗೊಂಡಿದೆ.ಇನ್ನೂ ವಿನಾಯಕ ವೃತ್ತದಲ್ಲಿ ಮತ್ತು ಹೊಸನಗರ ರಾಜ್ಯ ಹೆದ್ದಾರಿಯ ಒಂದು ಕಿ.ಮೀ.ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕ್ಕಾಗಿ 2.50 ಕೋಟಿ ರೂ ಸರ್ಕಾರದ ಅಭಿವೃದ್ದಿ ಅನುದಾನ ಬಿಡುಗಡೆಯಾಗಿದ್ದು ಅತಿ ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದೆಂದು ವಿವರಿಸಿ ಈಗಾಗಲೇ ರಿಪ್ಪನ್ಪೇಟೆ ವ್ಯಾಪ್ತಿಗೆ 28 ಕೋಟಿ ರೂ ಸರ್ಕಾರದ ಆಭಿವೃದ್ದಿ ಅನುದಾನವನ್ನು ತರುವ ಮೂಲಕ ಕಾಮಗಾರಿಗಳು ಪೂರ್ಣ ಹಂತ ತಲುಪಿವೆ ಎಂದರು.
ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬ ಬಿಜೆಪಿಯ ಆರೋಪಕ್ಕೆ ಉತ್ತರಿಸಿದ ಅವರು ಈ ಹಿಂದೆ ಕುಕ್ಕಳಲೇ-ನೇರಲಮನೆ- ಗವಟೂರು-ವಡಗೆರೆ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿ ಸಂಪೂರ್ಣ ಕಳಪೆಯಾಗಿ ಚಾಪೆ ಸುತ್ತುವಂತಾಗಿತು.ಅದನ್ನು ನಾವು ವಿರೋದಿಸಿದಾಗ ಅಗಿನ ಶಾಸಕರು ಏನು ಹೇಳಿ ಸಮರ್ಥಿಸಿಕೊಂಡಿದ್ದರು. ಈಗ ಸಾಗರ ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ತಲಾ ಎರಡು ಕಿ.ಮೀ. ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿರುವ ಬಿಜೆಪಿ ಪಕ್ಷದವರಿಗೆ ಸವಾಲು ಹಾಕುವ ಮೂಲಕ ನಾನೇ ಗುದ್ದಲಿ ಪಿಕಾಶಿ ಹಿಡಿದು ಆಗದು ತೋರಿಸುತ್ತೇನೆ ಕಳಪೆಯಾದರೆ ಗುತ್ತಿಗೆದಾರನಿಂದಲೇ ಪುನ: ಕಾಮಗಾರಿ ಮಾಡಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಆಧ್ಯಕ್ಷ ಹೆಚ್.ವಿ.ಈಶ್ಚರಪ್ಪಗೌಡ, ಗ್ರಾಮ ಪಂಚಾಯಿತ್ ಸದಸ್ಯರಾದ ಡಿ.ಈ.ಮಧುಸೂದನ್,ಎನ್.ಚಂದ್ರೇಶ್,ಆಶೀಫ್ಭಾಷಾ, ನಿರೂಫ್ ಕುಮಾರ್, ಪ್ರಕಾಶಪಾಲೇಕರ್,ಮುಖಂಡರಾದ ಉಮಾಕರ್, ರವೀಂದ್ರಕೆರೆಹಳ್ಳಿ, ಪರಮೇಶ್ ಎಂ ಎಂ, ರಮೇಶ ಪ್ಯಾನ್ಸಿ, ಪಿಯೂಸ್ ರೋಡ್ರಿಗಸ್, ಸಣ್ಣಕ್ಕಿ ಮಂಜು, ಶಿವಪ್ಪ ವಡಾಹೊಸಳ್ಳಿ, ಹೆಚ್.ಎನ್.ಉಮೇಶ್, ಮುಸ್ತಾಫ್,ವಿಜಯ ಮಳವಳ್ಳಿ, ಇನ್ನಿತರ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.
ಬೇಟೆಗೆ ಹೊರಟಿದ್ದ ನಾಲ್ವರ ಬಂಧನ; ಎರಡು ನಾಡ ಬಂದೂಕು ಸೇರಿ ಹಲವು ವಸ್ತು ವಶಕ್ಕೆ ! Four people were…
ಪ್ರವಾಸಿ ಬಸ್ ಪಲ್ಟಿ: ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಸಾವು, 20 ಮಂದಿಗೆ ಗಾಯ nursing students died and 20…
ಬೆಂಗಳೂರು ಮೂಲದ ಸಿವಿಲ್ ಕಂಟ್ರಾಕ್ಟರ್ ತೀರ್ಥಹಳ್ಳಿಯಲ್ಲಿ ನಾಪತ್ತೆ: ಮಾಹಿತಿ ನೀಡಲು ಪೊಲೀಸರ ಮನವಿ 55-year-old Bengaluru-based civil contractor Anil…
ಕರ್ತವ್ಯ ನಿರತ ಅರಣ್ಯ ವಾಚರ್ ಮೇಲೆ ಕರಡಿ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರಣ್ಯಾಧಿಕಾರಿಗಳು Forest department…
ರಾತ್ರಿ ವೇಳೆ ರೈತನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ಇಬ್ಬರು ಪೊಲೀಸರ ವಶಕ್ಕೆ Shivamogga rural police arrested two…
ರಿಪ್ಪನ್ಪೇಟೆ ಕೆಪಿಎಸ್ನಲ್ಲಿ ಉದ್ಯೋಗಾವಕಾಶ: 2 ಹುದ್ದೆಗಳಿಗೆ ಅರ್ಜಿ ಆಹ್ವಾನ | ಆ.22 ಅರ್ಜಿ ಸಲ್ಲಿಕೆಗೆ ಕೊನೆ ದಿನ Karnataka Public…