ಪರಿಸರ ಹೋರಾಟಗಾರ ಗಿರೀಶ್ ಆಚಾರ್ ರವರಿಗೆ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ ಪ್ರಶಸ್ತಿ
ಬೆಂಗಳೂರಿನಲ್ಲಿ ನ್ಯಾಷನಲ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ 2025 ಎಂಬ ಹೆಸರಿನ ಪ್ರಶಸ್ತಿಯನ್ನು ಪರಿಸರ ಹೋರಾಟಗಾರ , ಮಲೆನಾಡಿನ ಬುದ್ದ ಖ್ಯಾತಿಯ ಗಿರೀಶ್ ಆಚಾರ್ ರವರಿಗೆ ಲಭಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಸವಾಲು ಮತ್ತು ಹಲವಾರು ಅಡೆತಡೆಗಳ ಹೊರತಾಗಿಯೂ ತಮ್ಮ ಪರಿಸರ ಉಳಿಸುವ ಹೋರಾಟ ಕ್ಷೇತ್ರದಲ್ಲಿ ತಮ್ಮದೇ ಶೈಲಿಯಲ್ಲಿ ಸಾಧನೆಗೈದ ಹೊಸನಗರ ತಾಲೂಕಿನ ಪುಟ್ಟ ಗ್ರಾಮ ಬ್ರಹ್ಮೇಶ್ವರದ ಗಿರೀಶ್ ಆಚಾರ್ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬ್ರಹ್ಮೇಶ್ವರ ಗ್ರಾಮದ ದಂಪತಿಗಳ ಸರೋಜಮ್ಮ ದಿ. ಚಂದ್ರ ಆಚಾರ್ ರವರ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದಲ್ಲಿ ಜನಿಸಿದ ಗಿರೀಶ್ ಆಚಾರ್ ಓದಿದ್ದು ಕೇವಲ 9 ನೇ ತರಗತಿ ಆದರು ಇಂಗ್ಲಿಷ್ ಸರಳವಾಗಿ ಓದಿ ಬರೆಯಬಲ್ಲರು ಹಾಗೆ ಸಂವಿಧಾನ ಓದಿ ತಿಳಿದುಕೊಂಡು ಒಂದಿಷ್ಟು ಅರ್ಥ ಮಾಡಿಕೊಂಡ ಆಚಾರ್ ಅವರು ಜೀವನ ಉಪಯೋಗಕ್ಕೆ ಡ್ರೈವರ್ ದುಡಿಯುತಿದ್ದಾರೆ.
ಧರ್ಮಪತ್ನಿ ನಾಗರತ್ನ (ಟೈಲರ್) ಹಿರಿಯ ಮಗ ಅಖಿಲೇಶ್ ಆಚಾರ್ (ಖಾಸಗಿ ಕಂಪನಿ ಕೆಲಸ) ಎರಡನೇ ಮಗ ಭರತ್ ಆಚಾರ್ (ಕ್ಯಾಬ್ ಡ್ರೈವರ್) ದೊಂದಿಗೆ ಬದುಕು ಕಟ್ಟಿಕೊಂಡ ಆಚಾರ್ ರವರು ಇಂದಿಗೂ ಸಂಘ ಸಂಸ್ಥೆಯಲ್ಲಿ ಸಾಲ ಮಾಡಿಕೊಂಡು ಹೋರಾಟ ಮಾಡುತ್ತಿರುವ ಸಾಮಾನ್ಯ ವ್ಯಕ್ತಿ ಹಾಗೂ ಅಸಾಮಾನ್ಯ ವ್ಯಕ್ತಿತ್ವದ ಗಿರೀಶ್ ಆಚಾರ್ ಪರಿಸರ ಉಳಿಸುವಲ್ಲಿ ತಮ್ಮದೇ ಆದ ಹೋರಾಟ ನಡೆಸಿ ಗೆಲುವು ಸಾಧಿಸಿದ್ದಾರೆ.
ಆಚಾರ್ ಅವರ ಪರಿಸರ ಪ್ರೇಮ ಹೋರಾಟದ ದಾರಿ ಕೆಲವು ಒಂದಿಷ್ಟು ಅರಣ್ಯ ಕಬಳಿಕೆ ಚಟುವಟಿಕೆ ಮಾಡುವ ಮಂದಿಗೆ ನಾನಾ ಕಾರಣಗಳಿಂದ ಇಷ್ಟ ಆಗದೇ ಇರಬಹುದು ಆದರೆ ಬಡವರು ರೈತರ ವಿರೋದಿಯಲ್ಲ ಅವರ ಹೋರಾಟ ಮುಂದಿನ ಪೀಳಿಗೆ ಬಗ್ಗೆ ಯೋಚಿಸಿ ಅರಣ್ಯ ಉಳಿಸುವ ಆಲೋಚನೆಯೇ ಹೊರತು ಯಾರ ವಿರುದ್ದವೂ ಅಲ್ಲ ಎಂಬುವುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತಿರುವ ಸತ್ಯ….
ಆಚಾರ್ ಬಳಿ ನಿಮ್ಮ ನಿಷ್ಟುರವಾದ ನಿಷ್ಕಲ್ಮಶ ಹಾಗೂ ರಾಜಿರಹಿತ ಹೋರಾಟವೇಕೆ ಎಂದು ಪ್ರಶ್ನೆ ಮಾಡಿದರೆ ಅವರ ಉತ್ತರ ಹೀಗಿರುತ್ತೆ.. ಅರಣ್ಯ ನಾಶವಾದರೆ ಭವಿಷ್ಯದಲ್ಲಿ ಆಮ್ಲಜನಕದ ಅಭಾವದಿಂದ ಮನುಷ್ಯನ ಆಯಸ್ಸಿನ ಮೇಲೆ ಪರಿಣಾಮ ಬಿರಲಿದೆ ಹಾಗು ಅರಣ್ಯ ನಾಶದಿಂದ ವನ್ಯಜೀವಿ ಮನುಷ್ಯನ ನಡುವೆ ಸಂಘರ್ಷ ನಡೆಯಲಿದೆ ಅಂತಾರೆ, ಮಲೆನಾಡಲ್ಲಿ ಅರಣ್ಯ ನಾಶ ತಡೆಯದೇ ಹೋದಲ್ಲಿ ದಿನನಿತ್ಯ ಆಮ್ಲಜನಕ ಕೊಂಡು ಸೇವೆಸೋ ಕಾಲ ದೂರವಿಲ್ಲ ಅನ್ನೋದು ಆಚಾರ್ ಅವರ ಅನಿಸಿಕೆಯಾಗಿದೆ
ನ್ಯಾಷನಲ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ 2025 ಎಂಬ ಹೆಸರಿನ ಪ್ರಶಸ್ತಿಗೆ ಭಾಜನರಾದ ಗಿರೀಶ್ ಆಚಾರ್ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗ ಅಭಿನಂದನೆಗಳನ್ನು ಸಲ್ಲಿಸುತ್ತದೆ…
ಹೊಸನಗರ ತಾಲೂಕಿನ ಶಿಕ್ಷಕಿ ರತ್ನಕುಮಾರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ | ಶಿಕ್ಷಣ ಸಚಿವರಿಂದ ಅಭಿನಂದನೆ Rural teacher Ratnakumari…
ಬೇಟೆಗೆ ಹೊರಟಿದ್ದ ನಾಲ್ವರ ಬಂಧನ; ಎರಡು ನಾಡ ಬಂದೂಕು ಸೇರಿ ಹಲವು ವಸ್ತು ವಶಕ್ಕೆ ! Four people were…
ಪ್ರವಾಸಿ ಬಸ್ ಪಲ್ಟಿ: ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಸಾವು, 20 ಮಂದಿಗೆ ಗಾಯ nursing students died and 20…
ಬೆಂಗಳೂರು ಮೂಲದ ಸಿವಿಲ್ ಕಂಟ್ರಾಕ್ಟರ್ ತೀರ್ಥಹಳ್ಳಿಯಲ್ಲಿ ನಾಪತ್ತೆ: ಮಾಹಿತಿ ನೀಡಲು ಪೊಲೀಸರ ಮನವಿ 55-year-old Bengaluru-based civil contractor Anil…
ಕರ್ತವ್ಯ ನಿರತ ಅರಣ್ಯ ವಾಚರ್ ಮೇಲೆ ಕರಡಿ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರಣ್ಯಾಧಿಕಾರಿಗಳು Forest department…
ರಾತ್ರಿ ವೇಳೆ ರೈತನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ಇಬ್ಬರು ಪೊಲೀಸರ ವಶಕ್ಕೆ Shivamogga rural police arrested two…