Headlines

Crime News | ಗದ್ದೆಯಲ್ಲಿ ಗುತ್ತಿಗೆದಾರನ ಮೃತದೇಹ ಪತ್ತೆ..!!

Crime News | ಗದ್ದೆಯಲ್ಲಿ ಗುತ್ತಿಗೆದಾರನ ಮೃತದೇಹ ಪತ್ತೆ..!!


ವ್ಯಕ್ತಿಯೊಬ್ಬರ ಮೃತ ದೇಹವೊಂದು ಗದ್ದೆಯಲ್ಲಿ ದೊರೆಕಿರುವ ಘಟನೆ ಶಿವಮೊಗ್ಗದ ತುಂಗ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಗುತ್ತಿಗೆದಾರ ಹರಿಗೆಯ ನಿವಾಸಿ ವಾಸು ಎಂದು ಗುರುತಿಸಲಾಗಿದೆ.

ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟೊಯೋಟಾ ಶೋ ರೂಂ ಹಿಂಭಾಗದ ಗರುಡ ಲೇಔಟ್ ಬಳಿಯ ಗದ್ದೆಯಲ್ಲಿ ಗುತ್ತಿಗೆದಾರನ ಮೃತ ದೇಹ ಪತ್ತೆಯಾಗಿದ್ದು ಇದು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.‌

ಪತ್ತೆಯಾದ ಮೃತ ದೇಹದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.‌ ಮೃತದೇಹವನ್ನ ಮಹಾನಗರ ಪಾಲಿಕೆಯ ಗುತ್ತಿಗೆದಾರ  ವಾಸು ಎಂದು ಗುರುತಿಸಲಾಗಿದೆ. ವಾಸು ವಿಷ ಸೇವಿಸಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ. ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Leave a Reply

Your email address will not be published. Required fields are marked *

Exit mobile version