Breaking
12 Jan 2026, Mon

ಮಚ್ಚಿನಿಂದ ನಾಯಿಯನ್ನು ಕೊಲ್ಲಲು ಹೋಗಿ ಎದುರುಮನೆ ಅಜ್ಜಿಯನ್ನು ಹತ್ಯೆಗೈದ ಯುವಕ – ನಡೆದಿದ್ದೇನು..??? Crime News

ಮಚ್ಚಿನಿಂದ ನಾಯಿಯನ್ನು ಕೊಲ್ಲಲು ಹೋಗಿ ಎದುರುಮನೆ ಅಜ್ಜಿಯನ್ನು ಹತ್ಯೆಗೈದ ಯುವಕ – ನಡೆದಿದ್ದೇನು..??? Crime News


ಯುವಕನೊಬ್ಬ ನಾಯಿಯನ್ನು ಕೊಲ್ಲಲು ಹೋಗಿ ಎದುರುಗಡೆ ಮನೆಯ ಅಜ್ಜಿಯನ್ನು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ವಿಚಿತ್ರ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.

ಭದ್ರಾವತಿಯ ಅರಳಿಹಳ್ಳಿ ಗ್ರಾಮ ಮಂಜುನಾಥ ಎದುರು ಮನೆಯ ಅಜ್ಜಿಯನ್ನೇ ಕೊಂದಿರುವ ಆರೋಪಿಯಾಗಿದ್ದಾನೆ.

ಯುವಕನ ಮನೆಯ ಬಳಿ ಬಂದಿದ್ದ ನಾಯಿಯನ್ನು ಕೊಲ್ಲಲು ಮಚ್ಚಿನ ಸಮೇತನಾಗಿ ನಿನ್ನೆಯಿಂದಲೇ ಓಡಾಡುತ್ತಿದ್ದನಂತೆ. ಆಗ ಗ್ರಾಮದ ಕೆಲವರು ಯುವಕನಿಗೆ ಥಳಿಸಿ ಬುದ್ದಿಹೇಳಿ ಮನೆಗೆ ಕಳಿಸಿದ್ದರು ಎನ್ನಲಾಗುತ್ತಿದೆ.

ಈ ವಿಚಾರವಾಗಿ ಮಂಜುನಾಥ್ ನ ತಮ್ಮ ಮತ್ತು ಆತನ ಪತ್ನಿ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದಾರೆ. ಒಬ್ಬನೇ ಇದ್ದ ಮಂಜುನಾಥ್ ನಿಗೆ ಇಂದು ಮತ್ತೆ ನಾಯಿಯ ದರ್ಶನವಾಗಿದೆ. ನಾಯಿಯನ್ನು ಕಡಿಯಲು ಕತ್ತಿ ತೆಗೆದುಕೊಂಡಿದ್ದಾನೆ. ನಾಯಿ ತಪ್ಪಿಸಿಕೊಂಡು ಓಡಿ ಹೋಗಿದೆ.


ಈ ಸಂಧರ್ಭದಲ್ಲಿ ಮಂಜುನಾಥನ ಮನೆ ಎದುರು ಇರುವ ಅಜ್ಜಿ ಫಜಲುನ್ನಿಸ್ಸಾ (70) ಎಂಬವರು ವಿಷಯ ಗೊತ್ತಿಲ್ಲದೇ ತಮ್ಮ ಪಾಡಿಗೆ ತಾವು ಮನೆಯೊಳಗೆ ಹೋಗುತ್ತಿದ್ರು. ಈ ಮಂಜುನಾಥನಿಗೆ ಏನನ್ನಿಸಿತೋ ಏನೋ ಹಿಂಬದಿಯಿಂದ  ಅಜ್ಜಿಮನೆಗೆ ನುಗ್ಗಿದ ಆತ, ವೃದ್ಧೆಯ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅವಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.


ಇನ್ನೂ ಘಟನೆ ಬಗ್ಗೆ ಮಾಹಿತಿ ಇಲ್ಲದ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ಆರಂಭಿಸಿ ವಿಚಾರಣೆ ಮಾಡಿದ್ದಾರೆ. ಆಗ ಮಂಜುನಾಥನ ಮಾನಸಿಕತೆಯ ಬಗ್ಗೆ ಗೊತ್ತಾಗಿದ್ದು, ಅಲ್ಲದೆ ಆತವೆಸಗಿದ ಕೃತ್ಯದ ಬಗ್ಗೆ ತಿಳಿದುಬಂದಿದೆ.ಯುವಕನು ಮಾನಸಿಕ ವೈದ್ಯರಿಂದ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ದು ತಿಳಿದುಬಂದಿದೆ.

ಆದರೆ ಇತ್ತೀಚೆಗೆ ಔಷಧಿಯನ್ನು ಸೇವಿಸುವುದನ್ನ ನಿಲ್ಲಿಸಿದ್ದ. ಮೆಡಿಸನ್‌ ಬಿಟ್ಟಿದ್ದರಿಂದ ಆತ ಮತ್ತೆ  ಅಸ್ವಸ್ಥತೆಯಿಂದ ವರ್ತಿಸುತ್ತಿದ್ದ. ವೃದ್ಧೆಯನ್ನು ಕೊಲೆ ಮಾಡಿದ ಆತ ಅಲ್ಲಿಯೇ  ಸರ್ಕಲ್ ಬಳಿ ನಿಂತಿದ್ದ. ಆತನ ಮೈಮೇಲೆಲ್ಲಾ ರಕ್ತವಾಗಿರುವುದನ್ನ ಗಮನಿಸಿದ ಗ್ರಾಮಸ್ಥರು ಆತನಿಗೆ ಹೊಡೆದು ಏನು ಮಾಡಿದೆ ಎಂದು ಕೇಳಿದ್ದಾರೆ. ಏಟು ಬಿದ್ದ ಮೇಲೆ ನಡೆದ ಘಟನೆಯನ್ನು ಹೇಳಿದ್ದಾನೆ.

ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನ ಬಂಧಿಸಿದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *

Exit mobile version