PU RESULT 2024 | ಹೊಸನಗರ ಹೋಲಿ ರಿಡೀಮರ್ ಕಾಲೇಜಿಗೆ ಶೇ.100 ಫಲಿತಾಂಶ
ಹೊಸನಗರ : ಪಟ್ಟಣದ ಹೋಲಿ ರಿಡೀಮರ್ ಪದವಿ ಪೂರ್ವ ಕಾಲೇಜು ಇಂದು ಪ್ರಕಟಗೊಂಡ ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ. 100 ಫಲಿತಾಂಶದ ಸಾಧನೆ ಮಾಡಿ ಪಟ್ಟಣದ ಶೈಕ್ಷಣಿಕ ಪ್ರಗತಿಗೆ ಮತ್ತೊಂದು ಗರಿ ಮೂಡಿಸಿದೆ.
ವಿಜ್ಞಾನ ವಿಭಾಗದಲ್ಲಿ 36 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 28 ವಿದ್ಯಾರ್ಥಿಗಳು, ಹಾಗೂ ಕಲಾ ವಿಭಾಗದಲ್ಲಿ 10 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು ಎಲ್ಲರೂ ಉತ್ತಮವಾಗಿ ಪರೀಕ್ಷೆ ಎದುರಿಸಿ ಶಾಲೆಗೆ ಶೇ. 100 ಫಲಿತಾಂಶ ಗಳಿಸಿ ಕೊಟ್ಟಿದ್ದಾರೆ.
ವಾಣಿಜ್ಯ ವಿಭಾಗ
ಪ್ರಕೃತಿ ಪಿ ನಾಯಕ್ 581 ಅಂಕ ಗಳಿಸಿ ಶೇ. 96.83, ಹೆಚ್ ಆರ್ ಸಂತೃಪ್ತಿ 575 ಅಂಕಗಳಿಸಿ ಶೇ. 95.83, ಹೆಚ್ ಓ ನಾಗಶ್ರೀ 572 ಅಂಕ ಗಳಿಸಿ ಶೇ, 95.33, ಅಮೈ ಬಿ 571 ಅಂಕ ಗಳಿಸಿ ಶೇ. 95.16, ಈ ದೀಪಿಕಾ 570 ಅಂಕ ಗಳಿಸಿ ಶೇ. 95, ರಂಜಿತಾ 568 ಅಂಕ ಗಳಿಸಿ ಶೇ. 94.66 ಸನುಷ ಬೆನ್ನಿ ಮಟ್ಟಂ 558 ಅಂಕ ಗಳಿಸಿ ಶೇ. 93, ಮಂಜುನಾಥ ಎಸ್ ಬಿ 550 ಅಂಕ ಗಳಿಸಿ ಶೇ.91.66, ನಸ್ರೀನ್ 547 ಅಂಕ ಗಳಿಸಿ ಶೇ. 91.16, ಎನ್ ಸ್ಪಂದನ 546 ಅಂಕ ಗಳಿಸಿ ಶೇ. 91 ಅಂಕ ಪಡೆದಿದ್ದಾರೆ.
ಕಲಾ ವಿಭಾಗ
ಫಾತಿಮಾಜ್ ಜೋಹರ 562 ಅಂಕ ಗಳಿಸಿ ಶೇ. 92, ಓ ವಿನಯ 543 ಅಂಕ ಗಳಿಸಿ ಶೇ. 90.5 ಅಂಕ ಪಡೆದಿದ್ದಾರೆ.
ವಿಜ್ಞಾನ ವಿಭಾಗ
ಎಸ್ ವಿ ಸೌರವಿ 572 ಅಂಕ ಗಳಿಸಿ ಶೇ. 95.3, ಎಚ್ ಎಸ್ ದಾಮಿನಿ 569 ಅಂಕ ಗಳಿಸಿ ಶೇ. 94.83, ಅಶ್ವಲ್ ಲಾರೆನ್ಸ್ ಡಿ ಮೆಲ್ಲೋ 556 ಅಂಕ ಗಳಿಸಿ ಶೇ. 92.6, ಜೆ ಸುಖಿ 554 ಅಂಕ ಗಳಿಸಿ ಶೇ. 92.3, ವಿ ಹರ್ಷಿತಾ 554 ಅಂಕ ಗಳಿಸಿ ಶೇ. 92.3, ಶ್ರೀಯ ಕೆ 551 ಅಂಕ ಗಳಿಸಿ ಶೇ. 91.83, ಚೈತ್ರಾ ಸಿ 550 ಅಂಕ ಗಳಿಸಿ ಶೇ. 91.6, ಅನಿಷಾ ರೋಡ್ರಿಗಸ್ 549 ಅಂಕ ಗಳಿಸಿ ಶೇ. 91.5, ಕೆ ಆಕಾಶ್ 547 ಅಂಕ ಗಳಿಸಿ ಶೇ. 91.16 ಫಲಿತಾಂಶ ಗಳಿಸಿ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ.
ಕಳೆದ ಬಾರಿ ಶೇ.98 ಫಲಿತಾಂಶ ಕಾಲೇಜು ಪಡೆದಿತ್ತು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್