ತೆಂಗಿನಲ್ಲಿ ರೈನೋಸಿರಸ್ ಕೀಟ ನಿರ್ವಹಣೆಗೆ ಬೇರುಣ್ಣಿಸುವ ವಿಧಾನ ಪರಿಣಾಮಕಾರಿ ಕ್ರಮವಾಗಿದೆ – ಕೃಷಿ ವಿವಿ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ
ತೆಂಗು ಬೆಳೆಯಲ್ಲಿ ರೈನೋಸಿರಸ್ ದುಂಬಿಯ ಕೀಟಬಾಧೆಯು ಹೆಚ್ಚಾಗಿದ್ದು , ತೆಂಗು ಬೆಳೆಯ ಇಳುವರಿ ಕಡಿಮೆಯಾಗುವುದರ ಜೊತೆಗೆ ಅನೇಕ ಮರಗಳು ಸಾವಿಗೀಡಾಗುತ್ತಿವೆ.ಆದುದರಿಂದ ದುಂಬಿಯನ್ನು ಹತೋಟಿಯಲ್ಲಿಟ್ಟು ತೆಂಗು ಬೆಳೆಯನ್ನು ರಕ್ಷಿಸಬೇಕಿದೆ” ಎಂದು ಕೃಷಿ ವಿವಿಯ ವಿಜ್ಞಾನಿ ಡಾ.ಲತಾ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ,ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ , ಇರುವಕ್ಕಿಯ ಅಂತಿಮ ವರ್ಷದ ಬಿ. ಎಸ್ಸಿ ಕೃಷಿಯ ಗಂಧದಗುಡಿ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಕೋಡೂರಿನಲ್ಲಿ ಹಮ್ಮಿಕೊಂಡಿದ್ದಮತ್ತು ಚಿಗುರು ತಂಡದ ವಿದ್ಯಾರ್ಥಿಗಳು ಗವಟೂರಿನಲ್ಲಿ ಹಮ್ಮಿಕೊಂಡಿದ್ದ *ರೈನೋಸಿರಸ್ ಕೀಟಬಾಧೆಯ ನಿರ್ವಹಣೆಯ ಕ್ರಮವಾದ ಬೇರುಣ್ಣಿಸುವ ವಿಧಾನದ* ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
“ರೈನೋಸಿರಸ್ ದುಂಬಿಯ 1ನೇ ಹಂತದ ಮರಿಗಳು ಮೃದುವಾದ ಬೇರುಗಳನ್ನು ತಿನ್ನುತ್ತವೆ. ಪ್ರೌಢ ದುಂಬಿಗಳು ತೆಂಗು ಬೆಳೆಯ ಸುಳಿಯ ಭಾಗವನ್ನು ,ಹೊಂಬಾಳೆಯನ್ನು ಹಾಗೂ ಮೃದುವಾದ ಕಾಂಡವನ್ನು ತಿನ್ನುತ್ತವೆ. ಕೊರೆದ ಭಾಗಗಳಲ್ಲಿ ನಾರಿನಂತಹ ಪದಾರ್ಥಗಳು ರಂಧ್ರದ ಮೂಲಕ ಹೊರಬರುತ್ತದೆ ಹಾಗೂ ಎಲೆಗಳನ್ನು “ವಿ” ಆಕಾದಲ್ಲಿ ಕತ್ತರಿಯಿಂದ ಕತ್ತರಿಸಿದಂತೆ ಕೊರೆಯುತ್ತದೆ” ಎಂದು ದುಂಬಿಯ ಲಕ್ಷಣಗಳನ್ನು ಡಾ.ಲತಾ ತಿಳಿಸಿದರು.
ಬೇರುಣ್ಣಿಸುವ ವಿಧಾನವು ರೈನೋಸಿರಸ್ ನಿರ್ವಹಣೆ ಪ್ರಮುಖ ವಿಧಾನವಾಗಿದೆ. ಮುಖ್ಯ ಕಾಂಡದಿಂದ 2 ರಿಂದ 3 ಅಡಿ ದೂರದಲ್ಲಿ , 1 ಅಡಿ ಆಳದ ಗುಂಡಿಯನ್ನು ತೆಗೆದು ಪೆನ್ಸಿಲ್ ನಷ್ಟು ದಪ್ಪವಿರುವ ಸಕ್ರಿಯವಾಗಿರುವ ಗಾಢ ಕಂದುಬಣ್ಣದ ಬೇರನ್ನು ಆಯ್ಕೆ ಮಾಡಿಕೊಂಡು ,ಓರೆಯಾಗಿ ಕತ್ತರಿಸಬೇಕು..
ಕತ್ತರಿಸಿದ ಬೇರನ್ನು 10 ಮಿ.ಲೀ ಕ್ಲೋರ್ ಪೈರಿಫೋಸ್ ಹಾಗೂ 10ಮಿ.ಲೀ ನೀರಿರುವ ಪಾಲಿಥಿನ್ ಬ್ಯಾಗ್ ನಲ್ಲಿ ಮುಳುಗಿಸಬೇಕು ಎಂದು ಪ್ರಾಯೋಗಿಕವಾಗಿ ರೈತರಿಗೆ ತೋರಿಸಲಾಯಿತು..
24 ಗಂಟೆಗಳಲ್ಲಿ ಬೇರು ರಾಸಾಯನಿಕವನ್ನು ತೆಗೆದುಕೊಂಡಿರುತ್ತದೆ , ತೆಗೆದುಕೊಳ್ಳಲು ವಿಫಲವಾದರೆ , ಮತ್ತೊಂದು ಬೇರನ್ನು ಆಯ್ಕೆ ಮಾಡಿಕೊಂಡು ಪುನಃ ವಿಧಾನವನ್ನು ಮಾಡಬೇಕು. ಬೇರುಣ್ಣಿಸುವ ವಿಧಾನ ಮಾಡುವ ಮೊದಲು ಪಕ್ವ ಕಾಯಿಗಳನ್ನು ಕೊಯ್ಲು ಮಾಡಬೇಕು ಹಾಗೂ ಬೇರುಣ್ಣಿಸಿದ ನಂತರ 45 ದಿನಗಳವರೆಗೆ ಕೊಯ್ಲು ಮಾಡಬಾರದು. ತೆಂಗುವಿನಲ್ಲಿ ಕಂಡುಬರುವ ಬೇರೆ ಪ್ರಮುಖ ಕೀಟಗಳ ಬಾಧೆಗೂ ಈ ವಿಧಾನ ಪರಿಣಾಮಕಾರಿಯಾಗಿದೆ” ಎಂದು ಪ್ರಾತ್ಯಕ್ಷಿಕೆಯಲ್ಲಿ ಉಪಸ್ಥಿತರಿದ್ದ ಡಾ. ಸತೀಶ್ ತಿಳಿಸಿದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್