ಚೆಲುವೆಯ ಅಂದದ ಮುಖವನ್ನು ಹೋಲುವ ಕೀಟ ಪ್ರತ್ಯಕ್ಷ – ಮಲೆನಾಡ ಪ್ರಕೃತಿಯಲ್ಲೊಂದು ರೋಚಕ ಘಟನೆ|Hosanagara


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗರಕೊಡಿಗೆ ಗ್ರಾಮ ವಿಚಿತ್ರವಾದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಈ ಗ್ರಾಮದ ಎಂ ಸಿ ಸುಬ್ರಮಣ್ಯ ಎಂಬುವರ ಮನೆಯಲ್ಲಿ ಚೆಲುವೆಯ ಅಂದದ ಮುಖವನ್ನು ಹೊತ್ತು ಕೀಟ ಒಂದು ಪ್ರತ್ಯಕ್ಷವಾಗಿ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿ ಕೆಲಕಾಲ ಅಲ್ಲಿಯ ಸಂಚರಿಸಿ ನಂತರ ಕಣ್ಮರೆಯಾಗಿದೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಮನೆಯವರು ಅದರದೊಂದು ಫೋಟೋವನ್ನು ತೆಗೆದಿಟ್ಟುಕೊಂಡು ನಡೆದ ಘಟನೆಯ ಸಾಕ್ಷಿಯನ್ನಾಗಿಸಿದ್ದಾರೆ. ಹೌದು! ಚೆಲುವೆಯನ್ನು ಪೃಕೃತಿಗೆ ಹೋಲಿಸುತ್ತಾರೆ. ಆದರೆ ಪ್ರಕೃತಿಯಲ್ಲಿನ ಜೀವಿಯೊಂದು ಚೆಲುವೆಯ ಅಂದದ ಮುಖವನ್ನು ಹೊತ್ತು ತಂದಿತ್ತು. ಇಂತಹದೊಂದು ವಿಸ್ಮಯದ ಘಟನೆಗೆ ನಾಗರಕೊಡಿಗೆ ಸಾಕ್ಷಿಯಾಗಿದೆ.

ಬಣ್ಣ ಬಣ್ಣದ ವಿನ್ಯಾಸವುಳ್ಳ ಸುಂದರ ನಟ ನಟಿಯರ ಮುಖಚಿತ್ರ ಇರುವ ಧಿರಿಸು ಧರಿಸುವ ಫ್ಯಾಶನ್ ಪ್ರಿಯರಂತೆ ಹುಳು ಹಪ್ಪಟೆಗಳು ಇದೀಗ ಶುರು ಮಾಡಿದಂತಿದೆ. ಇಲ್ಲೊಂದು ಎಲೆ ಹುಳು ಅಥವಾ ಎಲೆಕೀಟ ಎಂದು ಕರಿಯುವ ಕೀಟವೊಂದು ತನ್ನ ಮೈಯನ್ನು ಚೆಲುವೆಯ ಅಂದದ ಮುಖವನ್ನಾಗಿ ಮಾರ್ಪಡಿಸಿಕೊಂಡಿತ್ತು. ಮೇಲ್ಮೈಯಲ್ಲಿ ಚೆಲುವೆಯ ಮುಖಚಿತ್ರವನ್ನು ಮೈಗೂಡಿಸಿಕೊಂಡು ಗಮನ ಸೆಳೆದಿತ್ತು. ಹುಳುವಿನ ಮೇಲೆ ಸುಂದರ ಯುವತಿಯ ಚಿತ್ರ ಒಡಮೂಡಿದ್ದು ಕಂಡು ಮನೆಯವರಿಗೆ ಅಚ್ಚರಿಯೋ ಅಚ್ಚರಿ.

ದೀಪಾವಳಿ ಸಮಯದಲ್ಲಿ ಹೊಸನಗರ ತಾಲ್ಲೂಕಿನ ನಾಗರಕೊಡಿಗೆ ಗ್ರಾಮದ ಎಂ.ಸಿ. ಸುಬ್ರಹ್ಮಣ್ಯ ರವರ ಮನೆಯ ಒಳಭಾಗಕ್ಕೆ ಕೀಟವೊಂದು ಹಾರಿ ಬಂದಿದೆ. ಒಳಗೆ ಸಂಪೂರ್ಣ ಹಾರಿ ಬರಲಾಗದೆ ಮನೆಯ ಟೈಲ್ಸ್ ಮೇಲೆ ತೆವಳ್ಳುತ್ತಾ ಸಾಗಿದೆ. ಆಗ ಮನೆಯೊಡತಿ ಅನ್ನಪೂರ್ಣ ಕೀಟವನ್ನು ಕಾಲಿನಲ್ಲಿ ಹೊರದೂಡಲು ಮುಂದಾದಾಗ ಅಚ್ಚರಿಯೊಂದು ಕಂಡು ಬೆರಗಾಗಿದ್ದಾರೆ.




ಹುಡುಗಿ ಚಿತ್ರ ಇರುವ ಹುಳು ಬರುತ್ತಿದೆಯೆಲ್ಲಾ, ಅರರೇ ಇದೇನಿದು..ಮನೆ ಬಾಗಿಲಿಗೆ ಬಂದ ಹುಳುವಿನ ಮೈ ಮೇಲೆ ಸುಂದರ ಯುವತಿಯ ರೂಪ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಕಾಗದ ಚೂರು ಅಂಟಿರಬಹುದೇನೋ ಎಂದು ಹತ್ತಿರದಿಂದ ಪರೀಕ್ಷಿಸಿದರೂ ಏನು ತಿಳಿಯದೆ ತಲೆಕೆಡಿಸಿಕೊಂಡು ನಂತರ ಮನೆಯಲ್ಲಿದ್ದ ಪಾತ್ರೆಯಿಂದ ಹುಳುವಿನ ಮೇಲೆ ಮಗ್ಗಿಸಿ ಇಟ್ಟು ಬಂದಿಸಿದ್ದಾರೆ. ಮನೆಗೆ ಬಂದವರಿಗೆಲ್ಲ ಈ ಹುಳುವಿನ ಸೌಂದರ್ಯವನ್ನು ತೋರಿಸಿ ಖುಷಿ ಪಟ್ಟಿದ್ದಾರೆ ಮಾರನೇ ದಿನ ಹುಳು ಮನುಷ್ಯ ಇಟ್ಟ ಡಬ್ಬಿಯಿಂದ ಕಣ್ಮರೆಯಾಗಿದೆ.



ಎಲೆ ಕೀಟಗಳು, ಹುಳುಗಳು ಎಲೆ ಆಕಾರ ಹೊಂದಿರುತ್ತವೆ. ಮಾವು, ಹಲಸು, ಕೌಲು ಮರದಲ್ಲಿ ಅದರ ಎಲೆಯಂತೆ ಕೀಟಗಳು ಕಾಣಿಸಿಕೊಂಡು ರಕ್ಷಣೆಯನ್ನು ಪಡೆದಿದೆ. ಗಿಡದಲ್ಲಿ ಹಸಿರೆಲೆ ಆಕಾರ ಹೊಂದಿರುವ ಎಲೆ ಕೀಟವು ತನ್ನ ಮೇಲ್ಮೈಯಲ್ಲಿ ಸುಂದರ ಯುವತಿಯ ಮುಖಚಿತ್ರದ ಚಿತ್ತಾರವನ್ನು ಮೂಡಿಸಿಕೊಂಡಿದ್ದು ಹೇಗೆ ಎಂದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !?

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…

5 hours ago

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…

7 hours ago

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…

24 hours ago

ಪೊಲೀಸರ ದಿಢೀರ್ ದಾಳಿ –  ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು

ಪೊಲೀಸರ ದಿಢೀರ್ ದಾಳಿ –  ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…

1 day ago

ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ

ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ Ripponpete Government…

1 day ago

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…

2 days ago