ನ್ಯಾಯ ಕೇಳಲು ಹೋದರೆ, ಗೃಹ ಸಚಿವರು ಬೈದು ಕಳಿಸಿದ್ದಾರೆ ಎನ್ನುವ ಹರ್ಷ ಸಹೋದರಿ ಆರೋಪಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಅವರು ಏನೇನೋ ಮಾತನಾಡಿದ್ರು, ಆ ರೀತಿ ಮಾತನಾಡಿದ್ರೆ ನಾವೇನು ಮಾಡೋಣ ಎಂದು ಸಚಿವರು ಪ್ರಶ್ನಿಸಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅರಗ ಜ್ಞಾನೇಂದ್ರ, ರಾಜು ನನ್ನ ಅತ್ಯಂತ ಆಪ್ತ ಮಿತ್ರ ಎಂದು ಮೊದಲು ಹೇಳಿದರು. ಈ ವೇಳೆ ಪತ್ರಕರ್ತರು ರಾಜು ಅಲ್ಲ ಹರ್ಷ ಎಂದು ನೆನಪಿಸಿದ್ದು, ಈ ವೇಳೆ ಸಚಿವರು, ಸಾರಿ ಹರ್ಷ ನನ್ನ ಅತ್ಯಂತ ಆಪ್ತಮಿತ್ರ ಎಂದರು.
ಹರ್ಷ ವಿಚಾರದಲ್ಲಿ ಆ ಕುಟುಂಬಸ್ಥರಿಗೆ ಎಷ್ಟ ಹೊಟ್ಟೆ ಉರಿದಿದ್ಯೋ ಅಷ್ಟೇ ನನಗೂ ಹೊಟ್ಟೆ ಉರಿದಿದೆ. ಹರ್ಷ ಕೊಲೆಯಾದ ಅವತ್ತಿನಿಂದ ಇವತ್ತಿನವರೆಗೆ, ಈ ಕೇಸ್ ನಲ್ಲಿ ನಾನು ಕೂಡ ಬೆನ್ನು ಬಿದ್ದಿದ್ದೇನೆ. ಅವರಿಗೆ ಶಿಕ್ಷೆ ವಿಧಿಸಲು ಏನೇನು ಮಾಡಬೇಕೋ ಅದೆಲ್ಲ ಮಾಡುತ್ತಿದ್ದೇವೆ ಎಂದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳು ಫೋನ್ ನಲ್ಲಿ ಮಾತನಾಡೋದು, ವಿಡಿಯೋ ಕಾಲ್ ಮಾಡೋದು ಕಂಡು ಬಂದಿತ್ತು. ಹಿರಿಯ ಪೊಲೀಸರಿಗೆ ಹೇಳಿ, ರೈಡ್ ಮಾಡಿಸಿದ್ದೇವೆ. ಇಡೀ ಜೈಲ್ ನ್ನು ಜಾಲಾಡಿಸಿದ್ದೇವೆ. ಏನೇನು ಉಪಕರಣ ಸಿಕ್ಕಿದ್ಯೋ ಹಿಡಿದಿದ್ದೇವೆ. ಬಳಕೆ ಮಾಡಿದವರ ಮೇಲೆ ಹಾಗೂ ಅದನ್ನು ಒಳಗೆ ಬಿಟ್ಟವರ ಮೇಲೆ ಎಫ್ ಐಆರ್ ಮಾಡಿಸಿದ್ದೇವೆ. ಉಪಕರಣಗಳನ್ನು ಒಳಗೆ ಬಿಟ್ಟ ಅಧಿಕಾರಿಗಳನ್ನು ಇದೀಗ ಅದೇ ಜೈಲಿನಲ್ಲಿ ಹಾಕಿದ್ದೇವೆ ಎಂದರು.
ಹರ್ಷ ಸಹೋದರಿ ಏನೇನೋ ಮಾತನಾಡ್ತಿದ್ರು ಮೊನ್ನೆ. ಅವರು ಏನೇನೋ ಹೇಳ್ತಾರೆ, ಯಾವತ್ತು ಮಾಡ್ತೀರಿ?, ಯಾಕಾಗಿಲ್ಲ? ಇದೆಲ್ಲ ಪ್ರಶ್ನೆ ನನಗೆ ಕೇಳಿದ್ರೆ ಏನ್ ಮಾಡ್ಲಿ? ಇಲ್ಲಮ್ಮ ಇದಕ್ಕಿಂತಹ ಜಾಸ್ತಿ ಮಾತಾಡಕ್ಕಾಗಲ್ಲ ಎಂದೆ. ಸಮಾಧಾನದಿಂದ ಮಾತನಾಡಿದ್ರೆ ಮಾತನಾಡಬಹುದು. ಆದ್ರೆ ನನ್ನ ಮಾತನ್ನು ಕೇಳುವ ವ್ಯವಧಾನ ಅವರಿಗಿಲ್ಲ. ಅವರು ಹೇಳಿದ ಹಾಗೆ ನಾನು ಮಾಡಕ್ಕಾಗಲ್ಲ. ಕಾಯ್ದೆ ಕಾನೂನು ನೋಡಬೇಕಾಗುತ್ತದೆ. ನಾನು ಹೋಮ್ ಮಿನಿಸ್ಟರ್ ಆಗಿ ಆರೋಪಿಗಳನ್ನು ಎಳೆದುಕೊಂಡು ಹೊಡೆಯಲು ಆಗುತ್ತಾ?, ಫೈರ್ ಮಾಡಕ್ಕಾಗುತ್ತಾ? ಎಂದು ಪ್ರಶ್ನಿಸಿದರು.
ಹಿಂದೂ ಹರ್ಷ ಸಹೋದರಿ ಅಶ್ವಿನಿ ಆರೋಪದ ವೀಡಿಯೋ ಇಲ್ಲಿ ವೀಕ್ಷಿಸಿ👇
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್