Hosanagara | ಗೋಪೂಜೆಗಾಗಿ ಇಟ್ಟಿದ್ದ ಬಂಗಾರದ ಸರ ನುಂಗಿದ ಹಸು – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ಗೋಪೂಜೆಗಾಗಿ ಇಟ್ಟಿದ್ದ ಬಂಗಾರದ ಸರ ನುಂಗಿದ ಹಸು – ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಹೊಸನಗರ ಇಲ್ಲಿನ ಸಮೀಪದ ಮತ್ತಿಮನೆ ಶ್ಯಾಮ್ ಉಡುಪ ಅವರ ಮನೆಯಲ್ಲಿ ದೀಪಾವಳಿ ಹಬ್ಬದ ಗೋ ಪೂಜೆಯ ದಿನ ಪೂಜೆಯ ಜೊತೆಗೆ ಇರಿಸಿದ್ದ ಬಂಗಾರದ ಸರ ಕಾಣೆಯಾಗಿತ್ತು. ಪೂಜೆ ಮುಗಿದ ನಂತರ ಬಂಗಾರದ ಸರ ಕಾಣದೆ ಇದ್ದಾಗ ಪೂಜೆ ಮಾಡಿದ ಸ್ಥಳದ ಅಕ್ಕಪಕ್ಕ ಹಾಗೂ ಕೊಟ್ಟಿಗೆಯಲ್ಲಿ ಹುಡುಕಲಾಗಿತ್ತು ಎಷ್ಟೇ ಹುಡುಕಿದರು ಸರ ಸಿಗದ ಕಾರಣ ಹಸುವೇ ಪ್ರಸಾದ ಜೊತೆಗೆ ನುಂಗಿರಬಹುದೇ ಎಂದು ಸಂಶಯ ಪಟ್ಟಿದ್ದರು….


