January 11, 2026

ನಾಳೆ ಭದ್ರಾವತಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ | HDK

ನಾಳೆ ಭದ್ರಾವತಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ | HDK

ಬೃಹತ್ ಕೈಗಾರಿಗೆ ಮತ್ತು ಉಕ್ಕು ಸಚಿವ ಹೆಚ್ ಡಿ.ಕುಮಾರಸ್ವಾಮಿ ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆಗೆ ನಾಳೆ ಭೇಟಿ ನೀಡಲಿದ್ದಾರೆ.ಕೇಂದ್ರದ ಸಚಿವರಾಗಿ ಮೊದಲ ಬಾರಿಗೆ ಭದ್ರಾವತಿಗೆ ಆಗಮಿಸುತ್ತಿದ್ದು ವಿಐಎಸ್ ಎಲ್ ಕಾರ್ಮಿಕರ ಮೊಗದಲ್ಲಿ ಖುಷಿ ತಂದಿದೆ.

ಭಾನುವಾರ ಬೆಳಗ್ಗೆ 7 ಗಂಟೆಗೆ ದೆಹಲಿ ಬಿಡುವ ಸಚಿವ ಕುಮಾರ ಸ್ವಾಮಿ ಅವರು ಮಧ್ಯಾಹ್ನ 12-15 ಕ್ಕೆ ಶಿವಮೊಗ್ಗ ಏರ್ ಪೋರ್ಟ್ ತಲುಪಲಿದ್ದಾರೆ. ಶಿವಮೊಗ್ಗ ಏರ್‌ ಪೋರ್ಟ್ ನಿಂದ ಭದ್ರಾವತಿ ವಿಐಎಸ್ ಎಲ್ ಗೆ ತೆರಳಲಿದ್ದಾರೆ.

ಮಧ್ಯಾಹ್ನ 1-30 ರಿಂದ 4 ಗಂಟೆಯ ವರೆಗೆ ವಿಐಎಸ್ ಎಲ್ ಪ್ಲಾಂಟ್ ಗೆ ಭೇಟಿ, ವಿಐಎಸ್ ಎಲ್ ಕಾರ್ಮಿಕರ ಭೇಟಿ, ಅಧಿಕಾರಿಗಳ ಜೊತೆ ರಿವಿವ್ಯೂ ಮೀಟಿಂಗ್ ನಡೆಸಲಿದ್ದಾರೆ. 5 ಗಂಟೆಗೆ ಕಾರ್ಖಾನೆಯಿಂದ ಶಿವಮೊಗ್ಗ ಏರ್ ಪೋರ್ಟ್ ಗೆ ಬರಲಿದ್ದು, ಸಂಜೆ 5-15 ಕ್ಕೆ ಸಚಿವರು ಬೆಂಗಳೂರು ಕಡೆ ವಿಮಾನದಲ್ಲಿ ಪ್ರಯಾಣ ಬೆಳಸಲಿದ್ದಾರೆ.

ನೂತನ ಕೇಂದ್ರ ಸರ್ಕಾರ ರಚನೆಯಾಗಿ 20 ದಿನಗಳಲ್ಲಿ ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆಗೆ ಆಗಮಿಸುತ್ತಿದ್ದು ಕಾರ್ಖಾನೆ ಪುನರ್ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತಿರುವುದು ಭದ್ರಾವತಿ ಜನರಿಗೆ ಖುಷಿ ತಂದಿದೆ

About The Author

Leave a Reply

Your email address will not be published. Required fields are marked *

Exit mobile version