Headlines

ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು – ಓರ್ವನ ಮೃತದೇಹ ಪತ್ತೆ..!!|crime news

ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲು – ಓರ್ವನ ಮೃತದೇಹ ಪತ್ತೆ!
ತೀರ್ಥಹಳ್ಳಿ: ಬೆಂಗಳೂರಿಂದ ಭೀಮನ ಕಟ್ಟೆಗೆ  ಪ್ರವಾಸಕ್ಕೆ ಬಂದಿದ್ದ ಮೂರು ಯುವಕರಲ್ಲಿ ಇಬ್ಬರು ಯುವಕರು  ನೀರಿನಲ್ಲಿ ಈಜಲು ಹೋಗಿ  ನಾಪತ್ತೆಯಾಗಿದ್ದರು.

ಇವರು ನೀರಿನಲ್ಲಿ ಮುಳುಗಿರಬಹುದು ಎಂದು ಶಂಕಿಸಲಾಗಿ ರಾತ್ರಿಯಿಡಿ ತೀರ್ಥಹಳ್ಳಿ ಪೊಲೀಸರು,ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.

ಇದೀಗ ಗೌತಮ್ ( 26) ವರ್ಷ ಅವರ ಮೃತದೇಹವನ್ನು ನೀರಿನಿಂದ ಮೇಲೆ ತೆಗೆಯಲಾಗಿದೆ. ಇನ್ನೋರ್ವ ಯುವಕನ ಪತ್ತೆಗಾಗಿ  ಶೋಧ  ಕಾರ್ಯಚರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Exit mobile version